Saturday, December 10, 2016

ಆಪ್ತಮಿತ್ರ :ಕಾಲವನ್ನು ತಡೆಯೋರು

ಚಿತ್ರ: ಆಪ್ತಮಿತ್ರ 
ಸಂಗೀತ: ಗುರುಕಿರಣ್ 
ಸಾಹಿತ್ಯ: ಚಿ . ಉದಯಶಂಕರ್ 
ನಿರ್ದೇಶನ: ಪಿ . ವಾಸು 
ಗಾಯಕರು: ಹರಿಹರನ್ ,ಗುರುಕಿರಣ್ 

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ

ಊರೊಂದು ಏತಕೆ ಬೇಕು, ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕಡಿಯುವ ಕಳ್ಳಾ ,ಅನ್ಯಾಯ ಒಡೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ

ಏನೊಂದು ಕೆಳದು ನಮಗೆ, ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ, ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ

Wednesday, December 7, 2016

ಶೃಂಗಾರ ಕಾವ್ಯ : ಜೀವನವೆಲ್ಲವೂ ನಾ ಹಾಡುವೆ

ಚಿತ್ರ: ಶೃಂಗಾರ ಕಾವ್ಯ 
ಸಂಗೀತ:ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ: ಎಸ್ ಮಹೇಂದರ್ 
ಗಾಯಕರು: ಎಸ್.ಪಿ.ಬಿ 

ಆ ಆ ಆ  ಹಾಹಾಹಾಹಾ ,ಆ ಆ ಆ  ಹಾಹಾಹಾಹಾ
ಲಲಲ ಲಲಲಲ ಲಲಲಲ ಲಾ ಲಾ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ಮಧುರ ಮಧುರವೀ  ಕನ್ನಡನಾಡ,ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವಾ, ಕರುಣೆ ನಾಡಿಗಿದು ಜೀವಾ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ, ನನ್ನ ಪದವಾಗಿದೆ......... ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ, ನನ್ನ ಪದ ಸೇರಿದೆ
ಧರಣೆ ಆಕಾಶ, ತೆರೆಸೋ ಆವೇಶ,ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ, ಹಾಡಿನ ನೆರಳಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ಚಲುವೆ ಚಲುವೆ ಈ ಕೊಡಗಿನ ನಾರಿ, ಚಲುವಿಗಿವಳೇ  ಸರಿಸಾಟಿ   . . ಆಹಾ... ಓಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ, ಇವಳಿಗ್ಯಾರು ಪೈಪೋಟಿ .... ಅಹಹಾ .... ಓಹೋಹೋ
ಇಂಥ ಊರಲ್ಲಿ  ಲಭಿಸಿದ ಸ್ನೇಹ, ಸ್ವರ್ಗ ಸನ್ಮಾನವೊ,...... ಹೋ
ಇಂಥ ಊರಲ್ಲಿ  ಫಲಿಸಿದ ಪ್ರೇಮ ಧೈವ ಸಾಕಾರವೋ,.......
ಧರಣೆ ಆಕಾಶ, ತೆರೆಸೋ ಆವೇಶ,ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಗುಂಗಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ  ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ


ದಾದಾ :ಈ ದ್ರೋಹ ವಂಚನೆ ಕಂಡು

ಚಿತ್ರ: ದಾದಾ 
ಸಂಗೀತ: ವಿಜಯಾನಂದ್   
ಸಾಹಿತ್ಯ: ಶ್ಯಾಮ್ ಸುಂದರ್ ಕುಲಕರ್ಣಿ 
ನಿರ್ದೇಶನ: ಪಿ .ವಾಸು
ಗಾಯಕರು: ಎಸ್ .ಪಿ. ಬಿ 


ದಾದಾ ದಾದಾ
ಈ ದ್ರೋಹ ವಂಚನೆ ಕಂಡು,ಈ ವ್ಯಕ್ತಿಯು ಹುಟ್ಟಿಹನು 
ಮತ್ತೇರಿ ಕೊಬ್ಬಿದ ಜನರಾ,ಸೊಕ್ಕೆಲ್ಲಾ ಮುರಿಯುವನು 
ದ್ವೇಷದಾ ರೋಷದಾ ಸದ್ದಡಗಿಸುವ ಯಮನೂ 

ದಾದಾ ದಾದಾ  . .  . . . . . . . .  


ಶಕುನಿ ಜನರ ಮೋಸದಾಟ, ಬಯಲಿಗೆಳೆವ ಧೀರನು 
ಮುಳ್ಳು ಕಂಡ್ರೆ ಮುಳ್ಳಿನಿಂದ,ತೀಡುವಂತ ಶೂರನು 
ಹೇ..... ಹೇ....... 
ಲೂಟಿ ಮಾಡೋ  ಜನ  ಏಟು ತಿಂದಾಗಿದೆ
ಪ್ರೀತಿಗೆ ಸೋಲುವಾ,ನೀತಿಗೆ ಬಾಳುವಾ 

ದಾದಾ ದಾದಾ .. . . . . 

ನೊಂದ ಜನರ ಕಂಡ ಮನವು,ಬೆಂದು ಹೋಯ್ತು ಈ ದಿನಾ 
ದುಷ್ಟ ಜನಕೆ ಶಿಕ್ಷೆ ನೀಡಿ ,ಶಿಷ್ಟರನ್ನು ಕಾಯ್ವನು  
ಹೇ..... ಹೇ....... 
ಕೆಚ್ಚು ಇವನಲ್ಲಿದೇ , ರೊಚ್ಚು ಮೈ ತುಂಬಿದೆ 
ಉಕ್ಕಿನಾ ತೋಳಿಗೆ ಬೆಟ್ಟವು ನಡುಗಿದೇ 

ದಾದಾ ದಾದಾ 

ಈ ದ್ರೋಹ ವಂಚನೆ ಕಂಡು,ಈ ವ್ಯಕ್ತಿಯು ಹುಟ್ಟಿಹನು 
ಮತ್ತೇರಿ ಕೊಬ್ಬಿದ ಜನರಾ,ಸೊಕ್ಕೆಲ್ಲಾ ಮುರಿಯುವನು 
ದ್ವೇಷದಾ ರೋಷದಾ ಸದ್ದಡಗಿಸುವ ಯಮನೂ 
ದಾದಾ ದಾದಾ 

Tuesday, December 6, 2016

ಪ್ರೇಮ ಚಂದ್ರಮ ಕೈಗೆ ಸಿಗುವುದೇ : ಯಜಮಾನ

ಚಿತ್ರ: ಯಜಮಾನ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಆರ್ ಶೇಷಾದ್ರಿ, ರಾಧಾಭಾರತಿ 
ಗಾಯಕರು: ರಾಜೇಶ್ 


ಪ್ರೇಮ ಚಂದ್ರಮ ಕೈಗೆ ಸಿಗುವುದೇ,ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ,ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಬಾನಲಿ ಹುಣ್ಣಿಮೆಯಾದರೆ ನೀ, ಸವೆಯ ಬೇಡ ಸವೆಯುವೆ ನಾ
ಮೇಣದ ಬೆಳಕೇ ಆದರೆ ನೀ,ಕರಗ ಬೇಡ ಕರಾಗುವೆ ನಾ
ಹೂದೋಟವೇ ಆದರೆ ನೀನು,ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಈ ಪ್ರತಿರೂಪವ ಬಿಡಿಸಲು ನಾ ನೆತ್ತರಲೇ ಬಣ್ಣವನಿಡುವೆ
ಈ ಪ್ರತಿ ಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು ಉಸಿರನೇ ಬಸಿದು ಪದವಿಡುವೆ
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ ನೀ ಹೇಳೇ ತಂಗಾಳಿ




Wednesday, November 30, 2016

ಚಿತ್ರ: ಕನಸುಗಾರ :ಎಲ್ಲೋ ಅದು ಎಲ್ಲೋ

ಚಿತ್ರ: ಕನಸುಗಾರ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಕರಣ್ 
ಗಾಯಕರು: ಎಸ್ .ಪಿ. ಬಿ 


ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 
ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ, ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ,ನೆನಪೇ ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ನಗೆಯ ಅಲೆಯಲ್ಲಿ, ನಿನ್ನ ನಗೆಯಾ ಸವಿನೆನಪು 
ಚಿಗುರೊ ಎಲೆಯಲ್ಲಿ ,ನಿನ್ನ ಲಜ್ಜೆಯ ಸವಿನೆನಪು 
ತಿಂಗಳ ಬೆಳಕಿನ ಸುಖದಲಿ ನಿನ್ನ ಮುಖದಾ ಸವಿನೆನಪು 
ರೆಪ್ಪೆ ತೆರೆಯುವಾ ನೆನಪೇ,  ಚೈತ್ರ ಮಾಸವು
ತುಟಿಯ ತೆರೆಯುವಾ, ನೆನಪೇ ಸುಪ್ರಭಾತವು 

ಯಾರೋ ಬರೆದೂರು ನನ್ನೆದೆಯಾ ಲಾಲಿ 
ಕೇಳೂ ಕ್ಷಣವೆಲ್ಲಾ ಸವಿನೆನಪಿನ ರಂಗೋಲಿ 

ಚಲಿಸೋ ಮೂಡದಲಿ ನಿನ್ನ ತಳುಕಿನ ಸವಿನೆನಪು 
ಊಕ್ಕೂ ಕಡಲಲ್ಲಿ ನಿನ್ನ ಆಸೆಯ ಸವಿನೆನಪು 
ಗುಡಿಯಲಿ ದೇವರ ದೀಪದಲಿ, ನಿನ್ನ ಪ್ರತಿರೂಪದ ನೆನಪು 
ಚೆಲುವು ತೆರೆಯುವಾ, ನೆನಪೇ ಪ್ರೇಮದರ್ಥವು 
ಹೃದಯ ತೆರೆಯುವಾ, ನೆನಪೇ ಬಾಳಿಗರ್ಥವು 

ಎಲ್ಲೋ ಅದು ಎಲ್ಲೋ, ಕಿವಿ ತುಂಬೊ  ರಾಗ
ಕೇಳೋ ಕ್ಷಣವೆಲ್ಲಾ, ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ ,ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ನೆನಪೇ, ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

Friday, November 25, 2016

ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು

ಚಿತ್ರ: ಸಿಂಹಾದ್ರಿಯ ಸಿಂಹ
ಸಾಹಿತ್ಯ: ಎಸ್. ನಾರಾಯಣ್
ಸಂಗೀತ: ದೇವ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ


ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು ಚೆನ್ನವನ ಕರದಲಿ ಮೆರೆವೆ
ಮರವಾದರೆ ನಾನು ಓಬವ್ವನ ಒನಕೆಯ  ಬೆರೆವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ!

Friday, October 14, 2016

ಶಬರಿ ಮಲೇ ಸ್ವಾಮಿ ಅಯ್ಯಪ್ಪ :ಶಂಕರ ಶಶಿಧರ ಗಜ ಚರ್ಮಮಾಂಬರ

ಚಿತ್ರ: ಶಬರಿ ಮಲೇ ಸ್ವಾಮಿ ಅಯ್ಯಪ್ಪ 
ಸಂಗೀತ: ಕೆ ವಿ ಮಹದೇವನ್ 
ಸಾಹಿತ್ಯ: 
ನಿರ್ದೇಶನ: ರೇಣುಕಾಶರ್ಮ 
ಗಾಯಕರು: ಎಸ್ ಪಿ ಬಿ 



ಓಂ  ....... ಓಂ ....... ಓಂ
ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ
ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ

ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,.......

ಓಂ.......  ಓಂ.......  ಓಂ ....... ಓಂ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಜಯ ಮೃತ್ಯುಂಜಯನೇ ........
ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ
ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ

ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......

ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ
ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ
ಕರುಣಾಸಾಗರನೇ.......

ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ

ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,  (ಕೋರಸ್ )

ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ.......
ಶಶಿಧರನೇ ....... ಹರನೇ ....... ಶಿವನೇ .......

ಯಜಮಾನ :ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಚಿತ್ರ: ಯಜಮಾನ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಆರ್  ಶೇಷಾದ್ರಿ,ರಾಧಾ ಭಾರತಿ 
ಗಾಯಕರು: ರಾಜೇಶ್ 


ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ, ನೀ ಹೇಳೇ ತಾಂಗಾಳಿ 
ಮನಸಾರೆ ಮೆಚ್ಚಿ ಕೊಳುವೆ ,ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಬಾನಲಿ ಹುಣ್ಣಿಮೆಯಾದರೆ ನೀ, ಸವೆಯಬೇಡ ಸವೆಯುವೆ ನಾ ..... 
ಮೇಣದ ಬೆಳಕೇ ಆದರೆ ನೀ, ಕರಗಬೇಡ ಕರಾಗುವೆ ನಾ ..... 
ಹೂದೋಟವೇ ಆದ್ರೆ ನೀನು, ಹೂಗಳ ಬದಲು ಉದುರುವೆ ನಾ 
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಈ ಪ್ರತಿರೂಪವಾ ಬಿಡಿಸಲು ನಾ, ನೆತ್ತರಲೇ ಬಣ್ಣವನಿಡುವೆ 
ಈ ಪ್ರತಿಬಿಂಬವ ಕೆತ್ತಲು ನಾ, ಎದೆಯ ರೋಮದ ಉಳಿ ಇಡುವೆ 
ಕವಿತೆಯ ಹಾಗೆ ಬರೆದಿಡಲು, ಉಸಿರಾನೇ ಬಸಿದು ಪದವಿಡುವೆ 
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 
ಮನಸಾರೆ ಮೆಚ್ಚಿ ಕೊಳುವೆ,ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 


ಬೇವು ಬೆಲ್ಲ : ಜನುಮ ನೀಡುತ್ತಾಳೆ

ಚಿತ್ರ: ಬೇವು ಬೆಲ್ಲ 
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ 
ನಿರ್ದೇಶನ: ಎಸ್  ನಾರಾಯಣ್ 
ಗಾಯಕರು: ರಾಜೇಶ್ ಕೃಷ್ಣನ್ 


ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ

ಓದಿದರೂ ...... ಗೀಚಿದರೂ ..... ಒಲೆಯ ಊದಬೇಕು ..... ತಾಯಿಯಾಗಬೇಕು 
ತಾಯಿ .... ನೆಲದಾ ... ಋಣಾ ತೀರಿಸಲೇಬೇಕು 
ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು 
ಕಾವೇರಿ......  ನೀರಲ್ಲಿ...... ಬೇಳೆ ಬೇಯಿಸಬೇಕು 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಜಾರಿದರು...... ಎಡವಿದರು...... ಕೈ ಹಿಡಿಯುತ್ತಾಳೆ...  ತಾಯಿ ಕಾಯುತ್ತಾಳೆ 
ಭೂಮಿ, ತಾಯಿ, ನೀ ಸತ್ತರು ಕರೀತಾಳೆ 
ತಾಯಿ, ಭಾಷೆ, ನೀ ಹೋದರು ಇರುತಾಳೆ 
ಸಾವಲ್ಲಿ...... ಕಾವೇರಿ...... ಬಾಯಿಗೆ ಸಿಗುತಾಳೆ 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಕೃಷ್ಣ ರುಕ್ಮಿಣಿ : ಕರ್ನಾಟಕದ ಇತಿಹಾಸದಲಿ


ಚಿತ್ರ: ಕೃಷ್ಣ ರುಕ್ಮಿಣಿ 
ಸಂಗೀತ: ಕೆ  ವಿ  ಮಹದೇವನ್ 
ಸಾಹಿತ್ಯ: ಆರ್ ಎನ್ ಜಯಗೋಪಾಲ್ 
ನಿರ್ದೇಶನ: ಹೆಚ್ ಆರ್ ಭಾರ್ಗವ  
ಗಾಯಕರು: ಎಸ್ ಪಿ ಬಿ 


ಕರ್ನಾಟಕದ ಇತಿಹಾಸದಲಿ ......
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಕರ್ನಾಟಕದ ಇತಿಹಾಸದಲಿ ... 


ಜ್ಞಾನದ ಜ್ಯೋತಿಯು ವಿದ್ಯಾರಣ್ಯರು, ಅನುಗ್ರಹಗೈದ ಭೂಮಿ ಇದು,
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು, ಅನುಗ್ರಹಗೈದ ಭೂಮಿ ಇದು,
ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ,
ವಿಜಯದ ಕಹಳೆಯ ಊದಿದರು, ವಿಜಯನಗರ ಸ್ಥಾಪನೆ ಮಾಡಿದರು...


ಕರ್ನಾಟಕದ ಇತಿಹಾಸದಲಿ ......

ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 

ಗಂಡರಗಂಡ ಧೀರ ಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ,
ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ,
ಕಲಿಗಳ ನಾಡು ಕವಿಗಳ ಬೀಡು,  ಕಲಿಗಳ ನಾಡು ಕವಿಗಳ ಬೀಡು,
ಎನಿಸಿತು ಹಂಪೆಯು ಆ ದಿನದೇ.
ಕನ್ನಡ ಬಾವುಟ ಹಾರಿಸಿದಾ ,ಮದುರೆವರೆಗೂ ರಾಜ್ಯವಾ  ಹರಡಿಸಿದ, 

ಕರ್ನಾಟಕದ ಇತಿಹಾಸದಲಿ...

ಸಂಗೀತ ನಾಟ್ಯಗಳ ಸಂಗಮವಿಲ್ಲೆ,ಶಿಲ್ಪಾ  ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೆ,ಶಿಲ್ಪಾ  ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೆ, ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು, ಯುಗ ಯುಗ ಅಳಿಯದ ಕೀರ್ತಿ ಇದು...
ಕನ್ನಡ ಭೂಮಿ ...ಕನ್ನಡ ನುಡಿಯು .......  .ಕನ್ನಡ ಪ್ರೀತಿ.......  .ಎಂದೆಂದೂ ಬಾಳಲಿ.
ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ...