Wednesday, June 22, 2011

ಗೌರಿ :ಇವಳು ಯಾರು ಬಲ್ಲೆಯೇನು

ಚಿತ್ರ: ಗೌರಿ
ಸಂಗೀತ: ಜಿ.ಕೆ.ವೆಂಕಟೇಶ್ 
ಸಾಹಿತ್ಯ: ಕೆ.ಎಸ.ನರಸಿಂಹ ಸ್ವಾಮಿ
ನಿರ್ದೇಶನ:ಎಸ.ಕೆ.ಎ ಚಾರಿ 
ಗಾಯಕರು: ಪಿ.ಬಿ.ಶ್ರೀನಿವಾಸ್


ಇವಳು ಯಾರು ಬಲ್ಲೆಯೇನು,ಇವಳು ಯಾರು ಬಲ್ಲೆಯೇನು,
ಇವಳು ಯಾರು ಬಲ್ಲೆಯೇನು,..........
ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು
ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು

ಅಡಿಯೇ ಮುಟ್ಟ ನೀಳ ಜಡೆ.........,ಅಡಿಯೇ ಮುಟ್ಟ ನೀಳ ಜಡೆ,
ಮುಡಿಯ ತುಂಬಾ ಹೂವು ಜಡೆ,ಇವಳು ಅಡಿಯನಿಟ್ಟ ಕಡೆ......... ಹೆಜ್ಜೆ ಹೆಜ್ಜೆಗೆ,
ಆಹಾ ........ಓ .........ಹೋ..........,ಆಹಾ ........ಓ .........ಹೋ.........
ಒಂದು ದೊಡ್ಡ ಮಲ್ಲಿಗೆ

ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು

ಅಂಗಾಲಿನ ಸಂಜೆಗೆಂಪು,ಕಾಲುನ್ದುಗೆ ಗೆಜ್ಜೆ ಇಂಪು,
ಮೋಹದ ಮಲ್ಲಿಗೆಯ ಕಂಪು,ಕರೆದು ಎನ್ನನ್ನು ಆಹಾ ....ಓ......ಓಹೋ.....
ಮೋಹದ ಮಲ್ಲಿಗೆಯ ಕಂಪು,ಕರೆದು ಎನ್ನನ್ನು ಆಹಾ ....ಓ......ಓಹೋ.....
ನಾನು ಹಿಡಿಯ ಹೋದೆನು, ನಾನು ಹಿಡಿಯ ಹೋದೆನು,

ಬಂಗಾರದ ಬೆಳಕಿನೊಳಗೆ,ಮುಂಗಾರಿನ ಮಿಂಚು ಬೆಳಗೆ,
ಇಳೆಗಿಳಿದಿಹ ಮೂಡದೊಳಗೆ,ಮೆರೆಯುತಿದ್ದಳು ,ನನ್ನ ಕರೆಯುತಿದ್ದಳು

ಇವಳು ಯಾರು ಬಲ್ಲೆಯೇನು,ಇವಳ ಹೆಸರ ಹೇಳಲೇನು,
ಇವಳ ದನಿಗೆ ತಿರುಗಲೇನು,ಇವಳು ಏತಕೋ ಬಂದು ನನ್ನ ಸೆಳೆದಳು

ಬಹದ್ದೂರ್ ಗಂಡು :ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ

ಚಿತ್ರ: ಬಹದ್ದೂರ್ ಗಂಡು 
ಸಂಗೀತ: ಎಂ ರಂಗಾರಾವ್
ಸಾಹಿತ್ಯ: ಚಿ.ಉದಯ ಶಂಕರ್ 
ನಿರ್ದೇಶನ: ವಿಜಯ್ 
ಗಾಯಕರು: ಡಾ. ರಾಜಕುಮಾರ್


ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು

ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ........
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ
ಮನ ತುಂಬಿರುವ ಶಾಂತಿಯ ನುಂಗಿ ಕೊನೆಯನು ನೋಡುತಿವೆ
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರಕ್ಕಸನಾ ವಿಷ ಗಾಳಿಯ ನುಂಗದೆ,ಬದುಕಿ ಎಲ್ಲರಾ ಉಳಿಸುವೆಯಾ,
ಬದುಕಿ ಎಲ್ಲರಾ ಉಳಿಸುವೆಯಾ ................

ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು

ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ನಿನ್ನಭಿಮಾನವಾ ಕೆಣಕುವುದಿಲ್ಲ,ಪ್ರೇಮದ ಸಂತೋಷ
ಅಂದದಾ ತುಟಿಯಲಿ ಹುಸಿನಗೆ ತೇಲಲಿ,
ಅಂದದಾ ತುಟಿಯಲಿ ಹುಸಿನಗೆ ತೇಲಲಿ
ಅಕ್ಕರೆ ನುಡಿಯ,ಸಕ್ಕರೆ ರುಚಿಯಾ,
ನೀಡಿ ಎಲ್ಲರಾ ಗೆಲ್ಲುವೆಯಾ,ನೀನು ಎಲ್ಲರಾ ಗೆಲ್ಲುವೆಯಾ,

ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು

Friday, May 20, 2011

ಶ್ರುತಿ ಸೇರಿದಾಗ : ನಗಲಾರದೇ

ಚಿತ್ರ: ಶ್ರುತಿ ಸೇರಿದಾಗ 
ಸಂಗೀತ: ಟಿ.ಜಿ.ಲಿಂಗಪ್ಪ 
ಸಾಹಿತ್ಯ: ಚಿ.ಉದಯ ಶಂಕರ್ 
ನಿರ್ದೇಶನ: ದತ್ತರಾಜ್ 
ಗಾಯಕರು: ಡಾ. ರಾಜಕುಮಾರ್

ನಗಲಾರದೇ............... ಅಳಲಾರದೇ..............ತೊಳಲಾಡಿದೆ ಜೀವಾ .......................
ನಗಲಾರದೇ,ಅಳಲಾರದೇ,ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,ಮನದಾಳದಾ ನೋವಾ


ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ,ಏನೇನೋ ವೇಷ, ಮಾತಲ್ಲಿ ಮೋಸ'
ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ,ಏನೇನೋ ವೇಷ, ಮಾತಲ್ಲಿ ಮೋಸ'
ಆ ಮಾತನೆಲ್ಲಾ ನಿಜವೆಂದು ನಂಬಿ, ಆ ಮಾತನೆಲ್ಲಾ ನಿಜವೆಂದು ನಂಬಿ,
ಮನದಾಸೆಯೇ.............ಮಣ್ಣಾಯಿತೇ .................
ಮನದಾಸೆಯೇ,ಮಣ್ಣಾಯಿತೇ,ಮನ ನೆಮ್ಮದಿ ದೂರಾಯಿತೇ,...........


ನಗಲಾರದೇ,ಅಳಲಾರದೇ,ತೊಳಲಾಡಿದೆ ಜೀವಾ

ನಿಜವಾದ ಪ್ರೇಮ,ನಿಜವಾದ ಸ್ನೇಹ,ಅನುರಾಗವೇನೋ,ಬಲ್ಲೋರು ಇಲ್ಲಾ,
ನಿಜವಾದ ಪ್ರೇಮ,ನಿಜವಾದ ಸ್ನೇಹ,ಅನುರಾಗವೇನೋ,ಬಲ್ಲೋರು ಇಲ್ಲಾ,
ಬಾಳಲ್ಲೇ ನಟನೆ,ಹೀಗೆಕೋ ಕಾಣೆ,ಬಾಳಲ್ಲೇ ನಟನೆ,ಹೀಗೆಕೋ ಕಾಣೆ,
ಬದುಕಲ್ಲಿಯೇ............ಹುಡುಗಾಟವೇ.............,
ಬದುಕಲ್ಲಿಯೇ,ಹುಡುಗಾಟವೇ,ಈ ಆಟಕೆ ಕೊನೆಯಿಲ್ಲವೇ,..............


ನಗಲಾರದೇ,ಅಳಲಾರದೇ,ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,ಮನದಾಳದಾ ನೋವಾ..............














ಅಮೃತ ಘಳಿಗೆ :ಹಿಂದುಸ್ಥಾನವು ಎಂದು ಮರೆಯದ

ಚಿತ್ರ: ಅಮೃತ ಘಳಿಗೆ
ಸಂಗೀತ: ವಿಜಯನಾರಸಿಂಹ 
ಸಾಹಿತ್ಯ: ವಿಜಯನಾರಸಿಂಹ
ನಿರ್ದೇಶನ: ಕಣಗಾಲ್ ಪುಟ್ಟಣ್ಣ 
ಗಾಯಕರು: ಜಯಚಂದ್ರನ್

ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ ,
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ,
ಈ ಕನ್ನಡ ಮಾತೆಯ ಮಡಿಲಲ್ಲಿ ,ಈ ಕನ್ನಡ ನುಡಿಯ ಗುಡಿಯಲ್ಲಿ 
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ 


ದೇಶ ಭಕ್ತಿಯಾ,ಬಿಸಿ,ಬಿಸಿ,ನೆತ್ತರು ಧಮನಿ,ಧಮನಿಯಲಿ ತುಂಬಿರಲಿ,
ದೇಶ ಭಕ್ತಿಯಾ,ಬಿಸಿ,ಬಿಸಿ,ನೆತ್ತರು ಧಮನಿ,ಧಮನಿಯಲಿ ತುಂಬಿರಲಿ,
ವಿಶ್ವ ಪ್ರೇಮದಾ ಶಾಂತಿ ಮಂತ್ರದ ಘೋಷಣೆ ಎಲ್ಲೆಡೆ ಮೊಳಗಿಸಲಿ 
ಸಕಲ ಧರ್ಮದ ಸತ್ವ ಸಮನ್ವಯ,ಸತ್ಯ ಜೋತಿಯ ಬೆಳಗಿಸಲಿ 


ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ 

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ,
ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ,
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲ್ಲಿ ಕೆತ್ತಿಸಲಿ 


ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ 
ಈ ಕನ್ನಡ ಮಾತೆಯ ಮಡಿಲಲ್ಲಿ ,ಈ ಕನ್ನಡ ನುಡಿಯ ಗುಡಿಯಲ್ಲಿ 
ಹಿಂದುಸ್ಥಾನವು ಎಂದು ಮರೆಯದ ,ಭಾರತ ರತ್ನವು ಜನ್ನಿಸಲಿ 


Thursday, May 19, 2011

ಬೆಳ್ಳಿ ಕಾಲುಂಗುರ :ಒಂದೇ ಒಂದು ಕಣ್ಣಾ ಬಿಂದು

ಚಿತ್ರ: ಬೆಳ್ಳಿ ಕಾಲುಂಗುರ
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ: ಕೆ.ವಿ.ರಾಜು 
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಮ್

ಒಂದೇ ಒಂದು ಕಣ್ಣಾ  ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,ಚಿಂತೆಯ ಹಿಂದೆಯೇ ಸಂತಸ ಇರಲು
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನಿನ್ನಾಣೆ
ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,ಪ್ರೇಮದ ಜೋಡಿಗೆ,ತಾಕದು ಪ್ರಳಯಾ,
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,
ದಾರಿ ತೋರೋ ನಾಯಕ ಒಂಟಿ ಎಂದು ಕೊಂಡರೆ,
ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,
ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ ರಾತ್ರಿಯಲಿ,
ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,
ನಂಬಿಕೆ ತಾಳುವ,ಅಂಜಿಕೆ ನೀಗುವಾ,ಶೋಧನೆ ಸಮಯ,ಚಿಂತಿಸಿ ಗೆಲ್ಲುವಾ,

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ

ಮೂಡಣದಿ ಮೂಡಿ ಬಾ, ಸಿಂದೂರವೇ ಆಗಿ ಬಾ,
ಜೀವಧಾರೆ ಆಗಿ ಬಾ,ಪ್ರೇಮ ಪುಷ್ಪ ಸೇರು ಬಾ,
ಬಾನಗಳ ತುಂಬಿ ಬಾ,ಆಸೆಗಳ ತುಂಬು ಬಾ,
ಸಿಂಗಾರವೇ ತೇಲಿ ಬಾ,ಸಂತೋಷವಾ ನೀಡು ಬಾ,
ಪ್ರೇಮದಾಸೆ ನನ್ನಾ ನಿನ್ನಾ ಬಂದಿಸಿದೆ ನನ್ನಾಣೆ,
ಸಂತಸದ ಕಣ್ಣಾ ರೆಪ್ಪೆ ಸಂದಿಸಿದೆ ನನ್ನಾಣೆ,
ದೇವರ ಗೂಡಿಗೂ ಬಿನ್ನಗಳಿರಲು,ಬಾಳಿನ ನಡೆಗೂ ಅಡ್ಡಿಗಳಿರಲು,
ಭೂಮಿಯಾಗಿ ನಾನಿರುವೆ,ಚಿಂತೆ ಬೇಡ ನನ್ನಾಣೆ,
ನಿನ್ನಾ ನೋವ ಮೇರುಗಿರಿಯ,ನಾ ಹೊರುವೆ ನಿನ್ನಾಣೆ  



Friday, March 25, 2011

ತಾಯಿಯ ಹೊಣೆ :ಮುಗಿಲ ಮಲ್ಲಿಗೆಯೋ

ಚಿತ್ರ:ತಾಯಿಯ ಹೊಣೆ 
ಸಂಗೀತ: ಸತ್ಯಂ
ಸಾಹಿತ್ಯ:
ನಿರ್ದೇಶನ: ವಿಜಯ್
ಗಾಯಕರು: ಎಸ.ಪಿ.ಬಾಲಸುಬ್ರಮಣ್ಯಮ್ 

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,
ನಿನ್ನಾ ಸ್ನೇಹ,ನಿನ್ನಾ ಪ್ರೇಮ,ಕನಸಿನಾ ಸಿರಿಯೋ,ಓ ಕನಸಿನಾ ಸಿರಿಯೋ,
ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,
ನಿನ್ನಾ ಸ್ನೇಹ,ನಿನ್ನಾ ಪ್ರೇಮ,ಕನಸಿನಾ ಸಿರಿಯೋ,ಓ ಕನಸಿನಾ ಸಿರಿಯೋ,

ಅರಳಿದ ತಾವರೆ ಹೂವಿನ ಹಾಗೆ, ಚೆಲುವೆಯಾ ಮೊಗವು,
ಚಂದ್ರನಾ ಕಂಡಾ ನೈದಿಲೆಯಂತೆ  ನಿನ್ನ ಈ ಮೊಗವು,
ಕಾಮಿನಿ ...........ಅರಗಿಣಿ .....
ನಿನ್ನ ನುಡಿಗಳು,ವೀಣೆ ಸ್ವರಗಳು,ಅರಿಯದೆ ಹೋದೆ,ಗೆಳತಿ ಬೆರಗಾದೆ,

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,

ಮನದಲಿ ತುಂಬಿ, ಹೃದಯದಿ ತುಂಬಿ.ಆಸೆ ತಂದಿರುವೆ,
ನೆನಪಲಿ ಮಿಂದು,ನಯನಗಳಲ್ಲಿ ಕನಸ ತುಂಬಿರುವೆ,
ಮೋಹವೋ ......ವಿರಹವೋ..
ನಿನ್ನ ಸೇರದೆ,ಕೂಡಿ ಬಾಳದೆ,ಜೀವವೇ ಹೋದೆ ...ಶಾಂತಿ ದೊರಕದೆ 

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,


Thursday, March 24, 2011

ಗಿರಿಕನ್ಯೆ : ಥೈ ಥೈ ಥೈ ಥೈ ಬಂಗಾರಿ

ಚಿತ್ರ: ಗಿರಿಕನ್ಯೆ 
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ದೊರೈ ಭಗವಾನ್ 
ಗಾಯಕರು: ಡಾ.ರಾಜಕುಮಾರ್



ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಥೈ ಥೈ ಥೈ ಥೈ ಬಂಗಾರಿ,ಸೈ ಸೈ ಸೈ ಎನ್ನು ಸಿಂಗಾರಿ,ಆಹಾಹಹಾ
ಥೈ ಥೈ ಥೈ ಥೈ ಬಂಗಾರಿ ಓಹೋ .......

ಕಾನನದಾ ದೇವತೆಯಂತೆ ಬಂದಿರುವೆ ಎದುರಲ್ಲಿ,
ಜೇನಾಗಿ ನೀ ತುಂಬಿರುವೆ ನನ್ನೆದೆಯಾ ಹೂವಲ್ಲಿ,
ಮೀನಾಗಿ ಹಾಡುತಲಿರುವೆ ಮನಸೆಂಬ ಮಡುವಲ್ಲಿ,
ಮಿಂಚಾಗಿ ಹರಿದಾಡಿರುವೆ ಈ ನನ್ನಾ ಮೈಯಲ್ಲಿ,ಈ ನನ್ನಾ ಮೈಯಲ್ಲಿ,

ಆಹಾ ! ಥೈ ಥೈ ಥೈ ಥೈ ಬಂಗಾರಿ,ಸೈ ಸೈ ಸೈ ಎನ್ನು ಸಿಂಗಾರಿ,ಅಲೆಲೆಲೇ
ಥೈ ಥೈ ಥೈ ಥೈ ಬಂಗಾರಿ

ಹಾರಾಡೋ ಹಕ್ಕಿಗಳಲ್ಲಿ,ಅರಗಿಳಿಯೇ ಅಂದವು,
ನಾ ಕಂಡ ಹೆಣ್ಣುಗಳಲ್ಲಿ,ಚೆಲುವೆ ನೀ ಚಂದವು,
ಆ ಆ ಆ ಆ  ಆಹ ಆಹ ಆಹ ಓ ಹೋಯ್
ಮುಳ್ಳೆಲ್ಲ ಹೂವಿನ ಹಾಗೆ,ನಿನ್ನೊಡನೆ ಬರುವಾಗ,
ಉರಿ ಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ,ಹೆಣ್ಣೇ ನೀ ನಗುವಾಗ,

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಜಿಗಿದಾಡೋ ಜಿಂಕೆಗಳಂತೆ ಕಾಡೆಲ್ಲಾ ಓಡುವಾ,
ನಲಿದಾಡೋ ಚಿಟ್ಟೆಗಳಂತೆ ವನವೆಲ್ಲಾ ನೋಡುವಾ,
ಹರಿದಾಡೋ ನದಿಯಂತಾಗಿ ಗಿರಿಯಿಂದಾ ಜಾರುವಾ,
ಕಡಲನ್ನು ಕೂಡುವ ಹಾಗೆ ಒಂದಾಗಿ ಸೇರುವಾ,ಒಂದಾಗಿ ಸೇರುವಾ 

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ









ಭಾಗ್ಯವಂತರು :ನಿನ್ನ ನನ್ನ ಮನವು ಸೇರಿತು

ಚಿತ್ರ:ಭಾಗ್ಯವಂತರು
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಭಾರ್ಗವ 
ಗಾಯಕರು:ಪಿ.ಬಿ.ಶ್ರೀನಿವಾಸ್ 

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. 
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,

ಏಕಾಂಗಿಯಾಗಿರಲು ಕೈ ಹಿಡಿದೇ,ಜೊತೆಯಾದೆ 
ತಾಯಂತೆ ಬಳಿ ಬಂದೆ,ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ,ನನ್ನೀ ಬದುಕಿಗೆ ಶ್ರುತಿಯಾದೆ ,
ನನ್ನೀ ಮನೆಯಾ ಬೆಳಕಾದೆ.

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,

ಎಂದೂ ಜೊತೆಯಲಿ ಬರುವೆ,ನಿನ್ನ ನೆರಳಿನ ಹಾಗೆ ಇರುವೆ,
ಕೊರಗದಿರು,ಮರುಗದಿರು,ಹಾಯಾಗಿ ನೀನಿರು.
ಎಂದೂ ಜೊತೆಯಲಿ ಬರುವೆ,ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ,ಆನಂದ ನಿನದಾಗಲಿ.
ನಗುವಿನ ಹೂಗಳ ಮೇಲೆ,ನಡೆಯುವ ಬಾಗ್ಯ ನಿನಗಿರಲಿ,
ನೋಡುವ ಬಾಗ್ಯ ನನಗಿರಲಿ .

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. 
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
 

 

Tuesday, March 15, 2011

ನೀ ನನ್ನ ಗೆಲ್ಲಲಾರೆ :ಅನುರಾಗ ಏನಾಯ್ತು

ಚಿತ್ರ: ನೀ ನನ್ನ ಗೆಲ್ಲಲಾರೆ 
ಸಂಗೀತ: ಇಳಯರಾಜ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ: ವಿಜಯ್ 
ಗಾಯಕರು: ಡಾ ರಾಜಕುಮಾರ್ 

ಐ ಲವ್ ಯು, ಐ ಲವ್ ಯು, ಐ ಲವ್ ಯು, ಐ ಲವ್ ಯು,

ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತು....

ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ, 
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ, 
ನಿನ್ನಾ ಪ್ರೇಮದಿಂದಾ ನಾ ದೂರಾಗಿ,ನನ್ನಾ ಕಂಗಳೆಲ್ಲಾ ಕಣ್ಣೀರಾಗಿ,
ಹಗಲಿರುಳೆಲ್ಲಾ ನಿನ್ನಾ ನೆನಪಾಯ್ತು,ಸರಸಾ ಹರುಷಾ ಬರಿ ಕನಸಾಯ್ತು.

ಅನುರಾಗ ಏನಾಯ್ತು..
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ, 
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ, 
ನಿನ್ನಾ ಸೇರೋ ಆಸೆ ನಾ ಕಂಡಾಗ,ಜೊತೆ ಬಾಳಲೆಂದು ಬಳಿ ಬಂದಾಗ 
ಸಿಡಿಲೊಂದೆರೆಗಿ ಬಡಿದಂತಾಗಿ,ವಿರಸ,ವಿರಹ ಕಹಿ ನನಗಾಯ್ತು 

ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತು....ಮನಸೇಕೆ ಕಲ್ಲಾಯ್ತು,


ದೃವತಾರೆ : ಆರತಿಯೇ ಧರೆಗಿಳಿದಂತೆ

ಚಿತ್ರ: ದೃವತಾರೆ
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಎಂ.ಎಸ್ ರಾಜಶೇಕರ್

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲಾ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಮಾಮರ ತೂಗುತ,ಚಾಮರ ಹಾಸುತ,ಪರಿಮಳ ಎಲ್ಲೇಡೇ ಚಲ್ಲುತಿರೆ.
ಗಗನದ ಅಂಚಲಿ ರಂಗನು ಚೆಲ್ಲುತಾ,ಸಂದ್ಯೇಯು ನಾಟ್ಯವಾ ಹಾಡುತಿರೆ.
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯು ನಲಿಯುತಿರೆ ,
ಲ ಲ ಲ ಲಾ ......ಲ ಲ ಲ ಲ ಲಾ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಪ್ರೇಮದ ಭಾವಕೆ,ಪ್ರೀತಿಯಾ ರಾಗಕೆ,ಮೌನವೇ ಗೀತೆಯಾ ಹಾಡುತಿರೆ,
ಸರಸದ ಸ್ನೇಹಕೆ.ಒಲವಿನ ಕಾಣಿಕೆ,ನೀಡಲು ಅಧರವು ಅರಳುತಿರೆ,
ಎಂದಿಗೂ ಹೀಗೆ ಬಾಳುವಾಸೆ ತುಂಬಿ ಬಂದು 
ಪ್ರೇಮಿಗಳು ನಲಿಯುತಿರೆ,ಪ್ರೇಮಿಗಳು ನಲಿಯುತಿರೆ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.


ಬೆಟ್ಟದ ಹುಲಿ :ಹಾಡುತಿರುವಾ ಮೂಡಗಳೇ

ಚಿತ್ರ: ಬೆಟ್ಟದ ಹುಲಿ
ಸಂಗೀತ: ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಮುಜಾಫರ್ ಶಹಜಹಾನ್ ಪುರಿ
ನಿರ್ದೇಶನ: ಎ.ವಿ.ಶೇಷಗಿರಿರಾವ್ 
ಗಾಯಕರು:ಪಿ.ಬಿ.ಶ್ರೀನಿವಾಸ್ 

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,
ಯಾರ ತಡೆಯೂ ನಿಮಗಿಲ್ಲಾ,ನಿಮ್ಮ ಭಾಗ್ಯ ನಮಗಿಲ್ಲಾ, 
ಹಾಡುತಿರುವಾ ಮೂಡಗಳೇ,

ಒಬ್ಬನು ತನ್ನಯ ಸಲುವಾಗಿ,ಹಲವರ ದೋಚಿ ನಗುವಾಂತಾ,
ಒಬ್ಬನೆಲ್ಲೋ ನಗುತಿರಲು,ಕೋಟಿ ಮಂದಿ ಅಳುವಂತಾ,
ಲೋಕವಿದುವಂತೆ ಹೋಯ್,ಪಾಪದಾ ಸಂತೆ,  
ಲೋಕವಿದುವಂತೆ ಹೋಯ್,ಪಾಪದಾ ಸಂತೆ,
ಪ್ರೀತಿಯಲ್ಲಿ,ನೀತಿಯೇಲ್ಲಿ,ಶಾಂತಿಯು ಎಲ್ಲಿದೆ ಜಗದಲ್ಲಿ.

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,

ಮನುಜರು ಮನುಜರ ದಾರಿಯಲಿ,ಮುಳ್ಳನು ಹಾಸಿ ಮೆರೆಯುವರು,
ಆಸೆಯಿಂದ ಮನೆಕಟ್ಟಿ,ಕಡೆಗೆ ಮಣ್ಣಲಿ ಮಲಗುವರು,
ಲೋಕದೀ ಆಟ ಹೊಯ್ ಜೀವ ಜಂಜಾಟ, ಲೋಕದೀ ಆಟ ಹೊಯ್ ಜೀವ ಜಂಜಾಟ, 
ಭೇಧ ಭಾವ ಆಳುತಿರುವಾ ಲೋಕದ ನ್ಯಾಯದ ನೆರಳಲ್ಲಿ. 

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,
ಯಾರ ತಡೆಯೂ ನಿಮಗಿಲ್ಲಾ,ನಿಮ್ಮ ಭಾಗ್ಯ ನಮಗಿಲ್ಲಾ, 
ಹಾಡುತಿರುವಾ ಮೂಡಗಳೇ,

ಹಾಲು ಜೇನು :ಹಾಲು ಜೇನು ಒಂದಾದ ಹಾಗೆ

ಚಿತ್ರ :ಹಾಲು ಜೇನು
ಸಂಗೀತ:ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಸೀಗೀತಂ ಶ್ರೀನಿವಾಸ ರಾವ್ 
ಗಾಯಕರು:ಡಾ.ರಾಜಕುಮಾರ್ 

ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  
ನೀ ನಗುತಲಿ ಸುಖವಾಗಿರೆ,ಆನಂದದಾ ಹೊನಲಾಗಿರೆ,ಬಾಳೇ ಸವಿಗಾನ ... 
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  

ಬಿಸಿಲಾಗಲಿ,ಮಳೆಯಾಗಲಿ,ನೆರಳಾಗಿ ನಾನು ಬರುವೆನು ಜೊತೆಗೆ,
ಬಿಸಿಲಾಗಲಿ,ಮಳೆಯಾಗಲಿ,ನೆರಳಾಗಿ ನಾನು ಬರುವೆನು ಜೊತೆಗೆ,
ಸವಿ ಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ,
ಹೂವಾಗಲಿ ಈ ಮೊಗವರಳಿ,ಸಂತೋಷದ ಪರಿಮಳ ಚೆಲ್ಲಿ,
ಹೂವಾಗಲಿ ಈ ಮೊಗವರಳಿ,ಸಂತೋಷದ ಪರಿಮಳ ಚೆಲ್ಲಿ,ಹಾಯಾಗಿರು.

ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ, 

ಈ ತಾವರೆ ಮೂಗವೇತಕೆ,ಮೂಗ್ಗಾದ ಹಾಗೆ ಸೊರಗಿದೆ ಚೆಲುವೆ, 
ಈ ತಾವರೆ ಮೂಗವೇತಕೆ,ಮೂಗ್ಗಾದ ಹಾಗೆ ಸೊರಗಿದೆ ಚೆಲುವೆ, 
ಇಂದೇತಕೆ ಈ ಮೌನವು ಹೀಗೇಕೆ ನೀನಿರುವೆ,
ನೀನೇತಕೆ ಬಾಡುವೆ ಕೊರಗಿ,ನಾನಿಲ್ಲವೇ ಆಸರೆಯಾಗಿ,
ನೀನೇತಕೆ ಬಾಡುವೆ ಕೊರಗಿ,ನಾನಿಲ್ಲವೇ ಆಸರೆಯಾಗಿ, ಹಾಯಾಗಿರು

ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  
ನೀ ನಗುತಲಿ ಸುಖವಾಗಿರೆ,ಆನಂದದಾ ಹೊನಲಾಗಿರೆ,ಬಾಳೇ ಸವಿಗಾನ ... 
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,



Monday, March 14, 2011

ಕಸ್ತೂರಿ ನಿವಾಸ : ಎಲ್ಲೇ ಇರು,ಹೇಗೆ ಇರು

ಚಿತ್ರ: ಕಸ್ತೂರಿ ನಿವಾಸ
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಚಿ.ಉದಯ್ ಶಂಕರ್ 
ನಿರ್ದೇಶನ:ದೊರೈ ರಾಜ್
ಗಾಯಕರು: ಪಿ.ಸುಶೀಲಾ 

ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,
ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,

ಬಾಳೆಂಬ ಗುಡಿಗೆ,ನೀ ದೇವನಾದೆ,
ಕರುಣಾಳು ನೀನು ಆಧಾರವಾದೆ,
ಬಾಳೆಂಬ ಗುಡಿಗೆ,ನೀ ದೇವನಾದೆ,
ಕರುಣಾಳು ನೀನು ಆಧಾರವಾದೆ,
ನಾ ಬೇಡಲಾರೆ ವರವೇನನು,ನೀ ನೀಡು ಸಾಕು ನಗೆಯೊಂದನು.

ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,

ನನ್ನಾಸೆ ನೂರು ಹೂವಾಗಿ ನಗಲು,
ಹೂಮಾಲೆ ಮಾಡಿ ನಿನಗೆಂದೇ ತರಲು
ನನ್ನಾಸೆ ನೂರು ಹೂವಾಗಿ ನಗಲು,
ಹೂಮಾಲೆ ಮಾಡಿ ನಿನಗೆಂದೇ ತರಲು
ಕಣ್ತುಂಬ ಕಂಡೆ ಆ ರೂಪವಾ,ಬೆಳಕಾಗಿ ಬಂದಾ ಆ ದೀಪವಾ.

ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,
ಎಂದೆಂದೂ ಮನದಲ್ಲಿ ನೀ ತುಂಬಿರು,

ಬಂಗಾರದ ಮನುಷ್ಯ : ಬಾಳ ಬಂಗಾರ ನೀನು

ಚಿತ್ರ:ಬಂಗಾರದ ಮನುಷ್ಯ 
ಸಂಗೀತ:ಜಿ.ಕೆ.ವೆಂಕಟೇಶ್
ಸಾಹಿತ್ಯ:ಹುಣಸೂರು ಕೃಷ್ಣಮೂರ್ತಿ 
ನಿರ್ದೇಶನ:ಸಿದ್ದಲಿಂಗಯ್ಯ 
ಗಾಯನ:ಪಿ.ಸುಶೀಲಾ 

ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ,

ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ, 
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ನಾನಯ್ಯಾ ಬೊಂಬೆ ನಾನಯ್ಯಾ...ಓ...ಹೋ...ಹೋಹೋ..ಓ .....
ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾಬೊಂಬೆ ನಾನಯ್ಯಾ

ಹಗಲೆಲ್ಲ ನೆನೆಸಿ,ಇರುಳೆಲ್ಲ ಬಯಸಿ,ಬಳಲಿದೆಯೋ,ಜೀವಾ ಕೇಳೆನ್ನ ಚೆಲುವಾ, 
ಹಗಲೆಲ್ಲ ನೆನೆಸಿ,ಇರುಳೆಲ್ಲ ಬಯಸಿ,ಬಳಲಿದೆಯೋ,ಜೀವಾ ಕೇಳೆನ್ನ ಚೆಲುವಾ, 
ಬೇಡೆಂದು ಜರಿದು,ನೀ ದೂರ ಹೋದರು, ಬೇಡೆಂದು ಜರಿದು,ನೀ ದೂರ ಹೋದರು, 
ಬಿಡದಂತೆ ನಿನ್ನಾ ನೆರಳಾಗಿ ಇರುವೆ, 

ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ನಾನಯ್ಯಾ ಬೊಂಬೆ ನಾನಯ್ಯಾ...ಓ...ಹೋ...ಹೋಹೋ..ಓ .....
ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ

ನನ್ನೆದೆಯಾ ನಿನ್ನಾ ಸೆರೆಮನೆಯೋ ಚನ್ನಾ,ಅದರಿಂದ ಎಂದು ಬಿಡುಗಡೆಯೇ ಸಿಗದು,
ನನ್ನೆದೆಯಾ ನಿನ್ನಾ ಸೆರೆಮನೆಯೋ ಚನ್ನಾ,ಅದರಿಂದ ಎಂದು ಬಿಡುಗಡೆಯೇ ಸಿಗದು,
ನೂರಾರು ಜನುಮಾ ನೀ ತಾಳಿ ಬಂದರೂ,ನೂರಾರು ಜನುಮಾ ನೀ ತಾಳಿ ಬಂದರೂ,
ಸತಿಯಾಗಿ ನಿನ್ನಾ ಜತೆಯಲ್ಲೇ ಬರುವೆ.... 

ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ನಾನಯ್ಯಾ ಬೊಂಬೆ ನಾನಯ್ಯಾ ...ಓ...ಹೋ...ಹೋಹೋ..ಓ .....
ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ



ರಾಜ ನನ್ನ ರಾಜ : ನಿನದೇ ನೆನಪು

ಚಿತ್ರ :ರಾಜ ನನ್ನ ರಾಜ 
ಸಂಗೀತ:ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯ ಶಂಕರ್ 
ನಿರ್ದೇಶನ:ಎ.ವಿ.ಶೇಷಗಿರಿರಾವ್

ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ 
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ತಂಗಾಳಿಯಲ್ಲಿ ಬೆಂದೆ,ಏಕಾಂತದಲ್ಲಿ ನಾ ನೊಂದೆ,
ತಂಗಾಳಿಯಲ್ಲಿ ಬೆಂದೆ,ಏಕಾಂತದಲ್ಲಿ ನಾ ನೊಂದೆ,
ಹಗಲಲಿ ತಿರುಗಿ ಬಳಲಿದೆ,ಇರುಳಲಿ ಬಯಸಿ ಕೊರಗಿದೆ,
ದಿನವು ನಿನ್ನ ನಾ ಕಾಣದೆ .......

ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ಕಡಲಿಂದ ಬೇರೆಯಾಗಿ,ತೇಲಾಡೋ ಮೋಡವಾಗಿ
ಕಡಲಿಂದ ಬೇರೆಯಾಗಿ,ತೇಲಾಡೋ ಮೋಡವಾಗಿ,
ಕರಗುತ ಧರೆಗೆ ಇಳಿವುದು,ಹರಿಯುತ ಕಡಲ ಬೇರೆವುದು,
ನಮ್ಮೀ ಬಾಳಿನಾ ಬಗೆ ಇದು....

ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ


ತಾಯಿಗೆ ತಕ್ಕ ಮಗ :ವಿಶ್ವನಾಥನು ತಂದೆಯಾದರೆ

ಚಿತ್ರ :ತಾಯಿಗೆ ತಕ್ಕ ಮಗ 
ಸಂಗೀತ :ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ವಿ.ಸೋಮಶೇಕರ್
ಗಾಯನ:ಡಾ.ರಾಜಕುಮಾರ್ 

ಹೇ.....ವಿಶ್ವನಾಥ ನೀನು ತಂದೆಯಾದರೆ........
ವಿಶಾಲಾಕ್ಷಿ ತಾಯಿಯಲ್ಲವೇ....ತಾಯಿಯಲ್ಲವೇ....
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ಯಶೋಧೆ ಕೃಷ್ಣನಾ ಬೆಳೆಸಿದರೇನು,ಯಶೋಧೆ ಕೃಷ್ಣನಾ ಬೆಳೆಸಿದರೇನು,
ದೇವಕಿಗೆ ಅವನು ಕಂದನಲ್ಲವೇ...
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.

ಶಂಭೂ ಮಹದೇವಾ,ಹರಹರ ಮಹದೇವಾ,ಶಂಭೂ ಮಹದೇವಾ

ಕಂದಾ ಕಾಣುವ ಮೊದಲಾ ದೇವರೇ,ಜನುಮಾ ನೀಡಿದಾ ಅಮ್ಮನಲ್ಲವೇ.
ಕಂದಾ ಕಾಣುವ ಮೊದಲಾ ದೇವರೇ,ಜನುಮಾ ನೀಡಿದಾ ಅಮ್ಮನಲ್ಲವೇ.
ತಾಯಿ ದೇವರೇ ಸುಳ್ಳು ನುಡಿದರೆ,ತಾಯಿ ದೇವರೇ ಸುಳ್ಳು ನುಡಿದರೆ,
ಸತ್ಯವೆಂಬ ಮಾತು ಎಲ್ಲಿದೆ,ಸತ್ಯವೆಂಬ ಮಾತು ಎಲ್ಲಿದೆ,

ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.

ಶಂಭೂ ಮಹದೇವಾ,ಹರಹರ ಮಹದೇವಾ,ಶಂಭೂ ಮಹದೇವಾ

ಗಂಗಾ ನದಿಯಲಿ,ಮಿಂದೂ ಬಂದರು ಪಾಪವಿನ್ನು ಕಳೆಯಲಿಲ್ಲವೇ,
ಗಂಗಾ ನದಿಯಲಿ,ಮಿಂದೂ ಬಂದರು ಪಾಪವಿನ್ನು ಕಳೆಯಲಿಲ್ಲವೇ,
ಕಾಶಿನಾಥನ ಬಳಿಗೆ ಬಂದರು,ಕಾಶಿನಾಥನ ಬಳಿಗೆ ಬಂದರು, 
ನ್ಯಾಯವಿನ್ನು ಏಕೋ ಕಾಣದೆ,ನ್ಯಾಯವಿನ್ನು ಏಕೋ ಕಾಣದೆ

ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ಯಶೋಧೆ ಕೃಷ್ಣನಾ ಬೆಳೆಸಿದರೇನು,ಯಶೋಧೆ ಕೃಷ್ಣನಾ ಬೆಳೆಸಿದರೇನು,
ದೇವಕಿಗೆ ಅವನು ಕಂದನಲ್ಲವೇ...
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.

ಭಾಗ್ಯದ ಲಕ್ಷ್ಮಿ ಬಾರಮ್ಮ :ಯಾವ ಕವಿಯು ಬರೆಯಲಾರ


ಚಿತ್ರ :ಭಾಗ್ಯದ ಲಕ್ಷ್ಮಿ ಬಾರಮ್ಮ 
ಸಂಗೀತ:ಸೀಗೀತಂ ಶ್ರೀನಿವಾಸ ರಾವ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಸೀಗೀತಂ ಶ್ರೀನಿವಾಸ ರಾವ್ 
ಗಾಯಕರು:ಡಾ.ರಾಜಕುಮಾರ್ 

ಯಾವ ಕವಿಯು ಬರೆಯಲಾರ,
ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ

ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ,

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ

ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ 

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ,

ಅವಳ ಹೆಜ್ಜೆ :ನೆರಳನು ಕಾಣದ ಲತೆಯಂತೆ

ಚಿತ್ರ :ಅವಳ ಹೆಜ್ಜೆ 
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಭಾರ್ಗವ 
ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ 

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 

ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ಈ ಗುಡಿಯ ದೇವಿ ನೀನು,ಈ ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ,ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ........

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 





ಜೋಗಿ :ಬೇಡುವೆನು ವರವನ್ನು

ಚಿತ್ರ :ಜೋಗಿ 
ಸಂಗೀತ:ಗುರುಕಿರಣ್ 
ಸಾಹಿತ್ಯ:ಪ್ರೇಮ್
ನಿರ್ದೇಶನ:ಪ್ರೇಮ್
ಗಾಯಕರು:ಪ್ರೇಮ್

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ, 
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,


ಭೂಮಿ ತಾಯಿಯ ನೋಡೋ ಆಸೆಯಾ
ಹೋತ್ತು ದಿನವು ಆ ಸೂರ್ಯ ಬರುತಾನೋ .....
ಸವಿ ಲಾಲಿಯಾ,ತಾಯಿ ಹೇಳೆಯಾ 
ಎಂದು ಧರೆಗೆ ಆ ಚಂದ್ರ ಬರುತಾನೋ .....
ದ್ವನಿ ಕೇಳದೇನು,ಕೇಳಯ್ಯ ನೀನು ,ದ್ವನಿ ಕೇಳದೇನು,ಕೇಳಯ್ಯ ನೀನು,
ಈ ತಾಯಿ ಎದೆ ಕೂಗನು, ಈ ತಾಯಿ ಎದೆ ಕೂಗನು,


ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ, 


ದೂರ ಹೋದರು,ಎಲ್ಲೇ ಇದ್ದರು,
ನೀನೇ ಮರೆತರೂ ತಾಯಿ ಮರೆಯಲ್ಲಾ,
ಸಾವೇ ಬಂದರೂ,ಮಣ್ಣೇ ಆದರೂ,
ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ,
ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ ,ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ
ಯುಗ ಉರುಳಿ ಕಳೆದೋದರು,ಹಣೆ ಬರಹ ಬದಲಾದರು. 


ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ, 
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
  

ಕರ್ಣ :ಆ ಕರ್ಣನಂತೆ ನೀ ದಾನಿಯಾದೆ

ಚಿತ್ರ:ಕರ್ಣ 
ಸಂಗೀತ:ಎಂ.ರಂಗರಾವ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ಭಾರ್ಗವ
ಗಾಯಕರು:ಕೆ.ಜೆ.ಯೇಸುದಾಸ್

ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............

ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ನಿನ್ನಂತ ರಂಗವಾ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,

ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............

ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು. 
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು. 
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗಾ  ನಿನ್ನನ್ನು ಮರೆಯರು.


ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು. 
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು. 
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ 
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು 

ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............












Monday, February 21, 2011

ಶಂಕರ್ ಗುರು : ಚೆಲುವೆಯ ನೋಟ ಚೆನ್ನ,

ಚಿತ್ರ: ಶಂಕರ್ ಗುರು 
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ವಿ.ಸೋಮಶೇಕರ್
ಗಾಯಕರು:ಡಾ !!ರಾಜಕುಮಾರ್ 

ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ.

ಕಾಮನ ಬಿಲ್ಲು ಚೆನ್ನ, ಸುಳಿವಾ ಮಿಂಚು ಚೆನ್ನ,
ಹೊಳೆಯುವ ನಿನ್ನ ಕಣ್ಣಾ ಕಾಂತಿ ಇನ್ನು ಚೆನ್ನ,
ತಣ್ಣನೆ ಗಾಳಿ ಚೆನ್ನ,ಹುಣ್ಣಿಮೆ ಚಂದ್ರ ಚೆನ್ನ,
ನಿನ್ನನು ಸೇರಿ ನಿಂತ,ನನ್ನ ಬಾಳೆ ಚೆನ್ನ,  

ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,ಚೆಲುವೆಯ ನೋಟ ಚೆನ್ನ.

ಜಿಂಕೆಯ ಕಣ್ಣು ಚೆನ್ನ,ಹವಳದ ಬಣ್ಣ ಚೆನ್ನ,
ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ,
ಬೆಳಗಿನ ಬಿಸಿಲು ಚೆನ್ನ,ಹೊಂಗೆಯ ನೆರಳು ಚೆನ್ನ,
ಗೆಳತಿಯೇ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ, 

ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ.
 
 

ತ್ರಿಮೂರ್ತಿ :ಮೂಗನ ಕಾಡಿದರೇನು

ಚಿತ್ರ: ತ್ರಿಮೂರ್ತಿ 
ಸಂಗೀತ: ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ಸಿ.ವಿ.ರಾಜೇಂದ್ರನ್ 
ಗಾಯಕರು:ಡಾ !!ರಾಜಕುಮಾರ್ 

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.
ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು.

ಬೆಳಕೆಲ್ಲೋ ಕಾಣಿಸದು ಕತ್ತಲೆಯೇ ತುಂಬಿಹುದು,
ನಿಜವೆಲ್ಲೋ ಓಡಿಹುದು ವಂಚನೆಯೇ ಕಾಣುವುದು 
ದಾರಿಯೇ ತೋರದೆ ಅಲೆಯುತಲಿರುವಾಗ 

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.
  
ನನ್ನವರು ದೂರಾಗಿ ಬಂಧುಗಳು ಹಗೆಯಾಗಿ
ನೆಮ್ಮದಿಯು ಮರೆಯಾಗಿ,ಅಳುತಿರಲು ನೋವಾಗಿ,
ಏನನು,ಹೇಳಲಿ ಕೆಣಕಲು ನನ್ನೀಗ

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.
 

ಶುಭ ಮಂಗಳ : ಸೂರ್ಯಂಗು,ಚಂದ್ರಂಗು,

ಚಿತ್ರ: ಶುಭ ಮಂಗಳ 
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:ಎಂ.ಏನ್.ವ್ಯಾಸ ರಾವ್ 
ನಿರ್ದೇಶನ:ಪುಟ್ಟಣ್ಣ ಕಣಗಾಲ್ 
ಗಾಯಕರು: ರವಿ 

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಮನೆ ತುಂಬಾ ಹರಿದೈತೆ ಕೆನೆ ಹಾಲು ಮೊಸರು 
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು 
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ 
ನುಡಿಯಗೆ ನಡೆಯಾಗೆ,ಸಿಡಿದೈತೆ ಕೋಪ, ಸಿಡಿದೈತೆ ಕೋಪ

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಬೆಳದಿಂಗಳು ಚಲೈತೆ ಅಂಗಳದಾ ಹೊರಗೆ 
ಕರಿ ಮೋಡ ಮುಸುಕೈತೆ ಮನಸಿನಾ ಒಳಗೆ 
ಬಯಲಾಗೆ ತುಳುಕೈತೆ ಹರುಷದ ಹೊನಲು 
ಪ್ರೀತಿಯ ತೆರಿಗೆ ಬಡಿದೈತೆ ಸಿಡಿಲು ,ಬಡಿದೈತೆ ಸಿಡಿಲು.

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.






ಬಹದ್ದೂರ್ ಗಂಡು : ಮುತ್ತಿನಂತ ಮಾತೊಂದು

ಚಿತ್ರ: ಬಹದ್ದೂರ್ ಗಂಡು
ಸಂಗೀತ: ಎಂ.ರಂಗಾರಾವ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ವಿಜಯ್ 
ಗಾಯನ :ಡಾ!! ರಾಜಕುಮಾರ್

ಹಾಡುವಾ ದನಿಯಲ್ಲಿ ಶ್ರುತಿ ಸೇರಬೇಕು,ನೋಡುವಾ ನೋಟದಲಿ ಹಿತ ಕಾಣಬೇಕು,
ಆಡುವಾ ಮಾತಿನಲಿ........ಪ್ರೀತಿ ಇರಬೇಕು..............
ಆ ಆಹಾ ಹಾ ಹಾ .........ಆಹಾ ಹಾ ಹಾ .........ಆಹಾ ಹಾ ಹಾ ಹಾ .........
ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
  
ಸಿರಿತನವೆಂದು ಶಾಶ್ವತವಲ್ಲ,ಬಡ ಜನರೆಂದು ಪ್ರಾಣಿಗಳಲ್ಲ,
ದೇವರ ಆಟ ಬಲ್ಲವರಿಲ್ಲ,ಬಾಳಿನ ಮರ್ಮ ಅರಿತವರಿಲ್ಲಾ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ.........ಪಾಪ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
ಎಂದು ಆಳಾಗ ಬಲ್ಲವನೇ ಅರಸಾಗುವ ಒಳ್ಳೆ  ಅರಸಾಗುವ ಹೇ ............

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು, 
ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು, 
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ......ಏನು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಕೋಟೆ ಕಟ್ಟಿ ಮೆರೆದೊರೆಲ್ಲ  ಏನಾದರು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ,ಅಯ್ಯೋ ಹೆಮ್ಮಾರಿಯೇ ಹೇ ......

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ........ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ, 
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,ಇಲ್ಲ ಮಣ್ಣುತಿನ್ನುವೆ ಹೇ...........  

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
 

Sunday, February 20, 2011

ಕಸ್ತೂರಿ ನಿವಾಸ :ಆಡಿಸಿ ನೋಡು ಬೀಳಿಸಿ ನೋಡು

ಚಿತ್ರ: ಕಸ್ತೂರಿ ನಿವಾಸ 
ಸಂಗೀತ: ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ದೊರೈ ರಾಜ್
ಗಾಯಕರು:ಪಿ.ಬಿ ಶ್ರೀನಿವಾಸ್ 

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು  
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು, 
ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು,ತೂಗುತಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,ದೀಪ ಬೆಳಕ ತರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,ಕೊನೆಯಾಗುವುದೇ.

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು  
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,


 





 



Saturday, February 19, 2011

ನಾಂದಿ :ಹಾಡೊಂದ ಹಾಡುವೆ

ಚಿತ್ರ: ನಾಂದಿ
ಸಂಗೀತ: ವಿಜಯ ಭಾಸ್ಕರ್ 
ಸಾಹಿತ್ಯ:ಆರ್.ಏನ್  ಜಯಗೋಪಾಲ್
ನಿರ್ದೇಶನ:ಏನ್.ಲಕ್ಶ್ಮಿನಾರಾಯಣ 
ಗಾಯಕರು:ಪಿ.ಬಿ ಶ್ರೀನಿವಾಸ್ 


ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಬರಿದಾದ ಮನೆ ಬೆಳಗೆ ನೀನೆಂದು ಬರುವೆ 
ಹಾಡೊಂದ ಹಾಡುವೆ ನೀ ಕೇಳು ಮಗುವೇ,

ಶ್ರೀಮಂತದಾನಂದ  ನಾ ನಿಡಲಿಲ್ಲಾ,
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ 
ಶ್ರೀಮಂತದಾನಂದ  ನಾ ನಿಡಲಿಲ್ಲಾ,
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲಾ ,
ಸಿರಿಯಾಗಿ,ನಿಧಿಯಾಗಿ,ನೀ ಬರುವೆಯಲ್ಲಾ 

ಹಾಡೊಂದ ಹಾಡುವೆ ನೀ ಕೇಳು ಮಗುವೇ,

ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ,
ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ, 
ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
ಇವಳಾಸೆ ಆಕಾಂಷೆ ನಿನಾದೆಯಲ್ಲ  

ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಬರಿದಾದ ಮನೆ ಬೆಳಗೆ ನೀನೆಂದು ಬರುವೆ
 

Friday, February 18, 2011

ಸಿಪಾಯಿ ರಾಮು :ಕಥೆ ಮುಗುಯಿತೆ.

ಚಿತ್ರ: ಸಿಪಾಯಿ ರಾಮು 
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಆರ್ ಏನ್ ಜಯಗೋಪಾಲ್
ನಿರ್ದೇಶನ:ಸ್ವಾಮಿ Y R
ಗಾಯಕರು:ಪಿ.ಬಿ ಶ್ರೀನಿವಾಸ್ 


ಕಥೆ ಮುಗುಯಿತೆ.........,ಆರಂಭದಾ ಮುನ್ನಾ ..........
ಲತೆ ಬಾಡಿ ಹೋಯಿತೇ ........ಹೂವಾಗುವಾ  ಮುನ್ನಾ.......

ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ
ಮಡದಿ ಮಕ್ಕಳು,ಸ್ನೇಹಿತರನ್ನು,ಮಣ್ಣಿನ ವಶ ಮಾಡಿ,
ನಡೆದಿಹೆ ಇಂದು ಅಂಧನ ರೀತಿ,
ಶೋಕದೆ.......... ಏನೋ ನಿನ್ನ ಗುರಿ 

ಎಲ್ಲಿಗೆ ಪಯಣಾ...........

ಸೋಲು ಗೆಲುವು,ಸಾವು ನೋವು,
ಜೀವನದುಯ್ಯಾಲೆ .................
ಸಾಯುವ ಮುನ್ನ ಜನಿಸಿದ ಮಣ್ಣಾ,
ದರುಶನ ನೀ ಪಡೆದು 
ತಾಯಿಯ ಮಡಿಲಾ,ಧುಳಲಿ ಬೆರೆತು,
ಶುನ್ಯದೇ ...........ಮುಗಿಸು ನಿನ್ನ ಕಥೆ   

ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ

ಸಂಪತ್ತಿಗೆ ಸವಾಲ್ : ನಗುವುದೋ,ಅಳುವುದೋ

ಚಿತ್ರ: ಸಂಪತ್ತಿಗೆ ಸವಾಲ್
ಸಂಗೀತ: ಜಿ .ಕೆ ವೆಂಕಟೇಶ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಎ.ವಿ.ಶೇಷಗಿರಿ ರಾವ್ 
ಗಾಯಕರು:ಪಿ.ಬಿ ಶ್ರೀನಿವಾಸ್ 


ನಗುವುದೋ,ಅಳುವುದೋ,ನೀವೇ ಹೇಳಿ ಇರುವುದೋ,ಬಿಡುವುದೋ,ಈ ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ,ಅಳುವುದೋ,ನಗುವುದೋ,ಈಗ ಏನು ಮಾಡಲಿ 
ನಗುವುದೋ,ಅಳುವುದೋ,ನೀವೇ ಹೇಳಿ,ಇರುವುದೋ,ಬಿಡುವುದೋ,ಈ ಊರಿನಲ್ಲಿ,

ಬಡವರ ಕಂಬನಿಗೆ ಬೆಲೆಯೇ ಇಲ್ಲಾ,
ಧನಿಕರ ವಂಚನೆಗೆ  ಕೊನೆಯೇ ಇಲ್ಲಾ,
ತಳುಕಿನಾ ಮಾತುಗಳ ನಂಬುವರೆಲ್ಲ
ಸತ್ಯವನು ನುಡಿದಾಗ ಸಿಡಿಯುವರೆಲ್ಲಾ,
ದೂರ ತಳ್ಳುವರೆಲ್ಲಾ, ದೂರ ತಳ್ಳುವರೆಲ್ಲಾ


ನಗುವುದೋ,ಅಳುವುದೋ,ನೀವೇ ಹೇಳಿ ಇರುವುದೋ,ಬಿಡುವುದೋ,ಈ ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ,ಅಳುವುದೋ,ನಗುವುದೋ,ಈಗ ಏನು ಮಾಡಲಿ
ನಗುವುದೋ,ಅಳುವುದೋ,ನೀವೇ ಹೇಳಿ 

ತಾಯಿಯೇ ಮಗನನ್ನು ನಂಬದೆ ಇರಲು,
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು ,
ಕಾಲವೇ ಎದುರಾಗಿ ವ್ಯರಿಯಾಗಲು,

ಅತ್ತಿಗೆಯ ಕಂಗಳಲಿ ಕಂಡೆನು ನಾನು,
ಮಾತೃವಾತ್ಸಲ್ಯವನು,ಮಾತೃವಾತ್ಸಲ್ಯವನು.

ಅಳುವುದೋ,ನಗುವುದೋ,ಈಗ ಏನು ಮಾಡಲಿ ,ನಗುವುದೋ,ಅಳುವುದೋ,ನೀವೇ ಹೇಳಿ 

ಬಡ್ಡಿಯಾ ಹಣ ತಿಂದು ಬಡವರ ಕೊಂದು,
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು,
ಹಾಕುವೆ ಸಂಪತ್ತಿಗೆ ನನ್ನ ಸವಾಲು,
ಸಿರಿತನದ ಗರ್ವವನು ಮೆಟ್ಟಿ ಮೆರೆಯುವೆ,
ನಿನ್ನ ಸೂಕ್ಕು ಮುರಿಯುವೆ,ನಿನ್ನ ಸೂಕ್ಕು ಮುರಿಯುವೆ

ನಗುವುದೋ,ಅಳುವುದೋ,ನೀವೇ ಹೇಳಿ, ಇರುವುದೋ,ಬಿಡುವುದೋ,ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ ,ಅಳುವುದೋ,ನಗುವುದೋ,ಈಗ ಏನು ಮಾಡಲಿ
ನಗುವುದೋ,ಅಳುವುದೋ,ನೀವೇ ಹೇಳಿ



 

ಪ್ರೇಮದ ಕಾಣಿಕೆ :ಬಾನಿಗೊಂದು ಎಲ್ಲೇ ಎಲ್ಲಿದೆ

ಚಿತ್ರ: ಪ್ರೇಮದ ಕಾಣಿಕೆ
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಫಿರೋಜ್ ದಿನ್
ನಿರ್ದೇಶನ:ವಿ.ಸೋಮಶೇಕರ್
ಗಾಯಕರು:ಡಾ !!ರಾಜಕುಮಾರ್ 

ಹೇ.....ಹೇ ಹೇ ......ಹೇ ಹೇಹೇಹೇ..ಹೇಹೇಹೇ.....ಆಹಾ ........ಉಹೊಂ ......
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ,
ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನಡೆಯದು 
ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ.


ಬಾನಿಗೊಂದು ಎಲ್ಲೇ ಎಲ್ಲಿದೆ,......

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ 
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ 
ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ 


ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...ನಿಧಾನಿಸು ನಿಧಾನಿಸು...

ಪ್ರೇಮದ ಕಾಣಿಕೆ : ಇದು ಯಾರು ಬರೆದ ಕಥೆಯೋ,

ಚಿತ್ರ: ಪ್ರೇಮದ ಕಾಣಿಕೆ
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ವಿ.ಸೋಮಶೇಕರ್ 
ಗಾಯಕರು:ಡಾ !!ರಾಜಕುಮಾರ್ 

ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,


ಇದು ಯಾರು ಬರೆದ ಕಥೆಯೋ,......

ಕಾಣದಿಹ ಕೈಯೊಂದು  ಸೂತ್ರ ಹಿಡಿದಿದೆ 
ಆಡಿಸಿದೆ, ಕಾಡಿಸಿದೆ,ಅಳಿಸಿ ನಗುತಿದೆ 
ಬರಿ ಕನಸಾಯ್ತು,ಸುಖ ಶಾಂತಿ ಇಲ್ಲಾ,
ಇನ್ನು ಬದುಕೇಕೋ ಕಾಣೆನಲ್ಲಾ. 


ಇದು ಯಾರು ಬರೆದ ಕಥೆಯೋ,......

ಹಾವ ಕಂಡ ಮೂಗನಂತೆ ಕೂಗಲಾರದೆ,
ಕಾಡಿನೊಳು ಓಡುತಿಹೆ ದಾರಿ ಕಾಣದೆ,
ಜೊತೆ ಯಾರಿಲ್ಲ  ನಾ ಒಂಟಿಯಾದೆ,
ನಗುವಿನ್ನೆಲ್ಲಿ ಸೋತು ಹೋದೆ   

ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,

ಎರಡು ಕನಸು :ಎಂದು ನಿನ್ನ ನೋಡುವೆ

ಚಿತ್ರ: ಎರಡು ಕನಸು
ಸಂಗೀತ: ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ ಶಂಕರ್ 
ನಿರ್ದೇಶನ:ದೊರೈ ಭಗವಾನ್ 
ಗಾಯಕರು:ಪಿ ಬಿ ಶ್ರೀನಿವಾಸ್


ಹೇ..ಹೇ.ಹೇ......ಆ ಹಾ ಹಾ ಹಾ ....ಓಹೋ ಹೋಹೋ ಹೋ .....ಲ ಲಾ ಲ ಲ  
ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ...
ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ...
ನಿಜ ಹೇಳಲೇನು,ನನ್ನ ಜೀವ ನೀನು 
ನೂರಾರು ಬಯಕೆ ಆತುರ ತಂದಿದೆ,ನೂರಾರು ಕನಸು ಕಾತರ ತುಂಬಿದೆ,
ಮುಗಿಲಿಗಾಗಿ ಬಾನು,ದುಂಬಿಗಾಗಿ ಜೇನು 
ನನಗಾಗಿ ನೀನು,ನಿನಗಾಗಿ ನಾನು, ನನಗಾಗಿ ನೀನು,ನಿನಗಾಗಿ ನಾನು, 


ಓಹೋ ಹೋ ಹೋ ಹೋ
ತಣ್ಣನೆ ಗಾಳಿ ಹಿತ ತೋರದಲ್ಲಾ,ಕೋಗಿಲೆ ಗಾನ ಸುಖ ನೀಡದಲ್ಲಾ,
ತಣ್ಣನೆ ಗಾಳಿ ಹಿತ ತೋರದಲ್ಲಾ,ಕೋಗಿಲೆ ಗಾನ ಸುಖ ನೀಡದಲ್ಲಾ,
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ,ನಿನ್ನೆಯ ನೆನಪಲ್ಲೇ ಸೋತೆ ನಾನು 
ನನ್ನಾಸೆ ನೀನು,ನಿನ್ನಾಸೆ ನಾನು,ನನ್ನಾಸೆ ನೀನು,ನಿನ್ನಾಸೆ ನಾನು

ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ... 
ನಿಜ ಹೇಳಲೇನು,ನನ್ನ ಜೀವ ನೀನು,ನಿಜ ಹೇಳಲೇನು,ನನ್ನ ಜೀವ ನೀನು 

ಕಂಗಳ ಕಾಂತಿ ನಿನಾಗಿರುವೆ,ಮೈ ಮನವೆಲ್ಲಾ ನೀ ತುಂಬಿರುವೆ, 
ಕಂಗಳ ಕಾಂತಿ ನಿನಾಗಿರುವೆ,ಮೈ ಮನವೆಲ್ಲಾ ನೀ ತುಂಬಿರುವೆ,
ನನ್ನೀ ಬಾಳಿಗೆ ಬೆಳಕಾಗಿರುವೆ,ಜನುಮ ಜನುಮದಾ ಜೋಡಿ ನೀನು   
ನನಗಾಗಿ ನೀನು,ನಿನಗಾಗಿ ನಾನು,ಆ ಹಾ ಆ ಆ.....
ನನಗಾಗಿ ನೀನು,ನಿನಗಾಗಿ ನಾನು ಓ ಹೋ .......ಹೋ ........

Monday, January 24, 2011

ಕುಲವಧು : ಒಲವಿನ ಪ್ರಿಯಲತೆ

ಚಿತ್ರ: ಕುಲವಧು 
ಸಂಗೀತ:ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಕಣಗಾಲ್ ಪ್ರಭಾಕರ ಶಾಸ್ತ್ರೀ 
ನಿರ್ದೇಶನ: ಟಿ.ವಿ ಸಿಂಗ್ ಟಾಕುರ್
ಗಾಯಕರು:ಪಿ ಬಿ ಶ್ರೀನಿವಾಸ್ 


ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......


ಮರೆಯದಂತ ಪ್ರೇಮರಾಶಿ
ಹೃದಯದಶಾ ರೂ......ಪಸಿ......
ಮನದೊಳಾಡೋ ಆ ವಿಲಾಸಿ
ಒಲಿದು ಬಂದ ಪ್ರೇಯಸಿ..........

ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......


ಪ್ರಣಯ ರಾಗದ ಜೀವ ಗೆಳತಿ
ಬಾಳ ಬೆಳಗೋ ಶ್ರೀಮತಿ....,
ಸನ್ನೆ ಮಾತಿನ ಸರಸಗಾತಿ
ಕನ್ನಡಾಂಬೆಯ ಕುಲಸತಿ...........


ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......





ದೇವರ ಗುಡಿ : ಚೆಲುವೆಯ ಅಂದದ ಮೊಗಕೆ

ಚಿತ್ರ: ದೇವರ ಗುಡಿ
ಸಂಗೀತ: ರಾಜನ್
ನಾಗೇಂದ್ರ
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಬಿ ರಾಮಮೂರ್ತಿ
ಗಾಯಕರು:


ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣಾ
ನಲಿಯುತ ಬಾಳುವ ಮನೆಗೇ ಹೆಣ್ಣೇ  ಭೂಷಣಾ,
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣಾ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣಾ,
ಸುಖ ಸಂಸಾರಕೆ ಎಂದು ಸತಿಯೇ ಕಾರಣ

ಬಾನಿಗೆ ಎಂದೆದಿಗೂ ಆ ರವಿಯೇ ಭೂಷಣಾ
ಬಳಕುವಾ ಲತೆಗೆ ಹೆಣ್ಣೀನಾ ಮುಡಿಗೆ,ಹೂವೆ ಭೂಷಣಾ,
ರಜನಿಗೆ ಎಂದೆದಿಗೂ ಆ ಶಶಿಯೇ ಭೂಷಣಾ,
ಅರಳಿದಾ ಮನಕೆ,ಹವಳದ ತುಟಿಗೆ ನಗುವೇ ಭೂಷಣಾ.
ನೋವಿಗೆ.......ನಲಿವಿಗೆ....... ನೋವಿಗೆ.......ನಲಿವಿಗೆ....... ಹೆಣ್ಣೇ ಕಾರಣಾ,

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣಾ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣಾ,
ಸುಖ ಸಂಸಾರಕೆ ಎಂದು ಸತಿಯೇ ಕಾರಣ

ಮದುವೆಯ ಅನುಬಂದವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವು ಬಾಡದು,
ದೇಹವು ದೂರಾದರು,ಮನಸು ಮರೆಯದು,
ಬೇರೆತಿಹ ಜೀವಾ,ವಿರಹದಾ ನೋವ ಎಂದೂ ಸಹಿಸದು,
ಒಲವಿನಾ........ಜೀವನಾ.....ಒಲವಿನಾ........ಜೀವನಾ.....ಸುಖಕೇ ಸಾಧನಾ

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ  ಭೂಷಣ,
ಸುಖ ಸಂಸಾರಕೆ ಎಂದು ಸತಿಯೇ ಕಾರಣ


ಮಾನಸ ಸರೋವರ : ವೇದಾಂತಿ ಹೇಳಿದನು

ಚಿತ್ರ: ಮಾನಸ ಸರೋವರ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:ವಿಜಯನಾರಸಿಂಹ
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು:ಪಿ ಬಿ ಶ್ರೀನಿವಾಸ್ 


ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

ವೇದಾಂತಿ ಹೇಳಿದನು,.ಈ ಹೆಣ್ಣು ಮಾಯೆ ಮಾಯೆ,
ಕವಿಯೊಬ್ಬ ಕನವರಿಸಿದನು,ಓ ಇವಳೇ ಚೆಲುವೆ,
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ,ಸ್ವರ್ಗವನೇ ಗೆಲ್ಲುವೆ,

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

 ವೇದಾಂತಿ ಹೇಳಿದನು,ಈ ಬದುಕು ಶೂನ್ಯ ಶೂನ್ಯ,
ಕವಿ ನಿಂತು ಸಾರಿದನು,ಓ...ಇದು ಅಲ್ಲ ಶೂನ್ಯ,
ಜನ್ಮ ಜನ್ಮದಿ ಸವಿದೆ,ನಾನೆಷ್ಟು ಧನ್ಯ ನಾನೆಷ್ಟು ಧನ್ಯ...

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ಮಣ್ಣೆಲ್ಲ ಹೊನ್ನು ಹೊನ್ನು,ಮಣ್ಣೆಲ್ಲ ಹೊನ್ನು ಹೊನ್ನು,

ಚಂದನದ ಗೂಂಬೆ :ಆಕಾಶದಿಂದ ಧರೆಗಿಳಿದ ರಂಭೆ

ಚಿತ್ರ: ಚಂದನದ ಗೂಂಬೆ
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ದೂರೈ-ಭಗವಾನ್
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ 


ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ಬಂಗಾರದಿಂದ  ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ,
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,
ಆ ದೇವರೇ ಕಾಣಿಕೆ ನೀಡಿದಾ,ನನ್ನಾ ಜೊತೆ ಮಾಡಿದ...ಆಹಾ........ 

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ನಡೆವಾಗ ನಿನ್ನಾ,ಮೈ ಮಾಟವೇನು,
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ ಕಂಡೆನು,ಸೋತೆನು,ನಿನ್ನಾ ಸೆರೆಯಾದೆನು...ಆಹಾ........

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,....ಚಂದನದ ಗೂಂಬೆ,...ಚಂದನದ ಗೂಂಬೆ,.....ಚಂದನದ ಗೂಂಬೆ,

ಕ್ರಾಂತಿ ವೀರ :ಯಾರು ಏನು ಮಾಡುವರು

ಚಿತ್ರ: ಕ್ರಾಂತಿ ವೀರ
ಸಂಗೀತ: ಸತ್ಯಂ
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ: ಬಿ ರಾಮಮೂರ್ತಿ
ಗಾಯಕರು: ಪಿ ಬಿ ಶ್ರೀನಿವಾಸ್

ಆಹಾಹಾ .....ಹಾ.....ಹೇಹೇಹೇ......ಹೇಹೇ........
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಸತ್ಯದ ಹಾದಿಯಲಿರುವಾಗ,ಧರ್ಮವೇ ರಕ್ಷಿಸುತಿರುವಾಗ,
ಈ ನಾಡಿಗೆ ನಾಡೆ ಹಿಂದಿರುವಾಗ,ಕನ್ನಡ ನನ್ನುಸಿರಾಗಿರುವಾಗ,
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,


ಅನ್ನವಾ,ತಿನ್ನದೇ ಚಿನ್ನ ತಿನುವೆಯೇನು.
ಹೊನ್ನಿಗೆ ನಿನ್ನ ನೀ ಮಾರಿ ಕೊಳುವೆಯೇನು,
ಮೂಸದಾ ಹಾದಿಯು ಸುಖವ ತರುವುದೇನು,
ಪ್ರೀತಿಯ ಮರೆತರೆ ಶಾಂತಿ ಇರುವುದೇನು,
ದಾನವನಾಗದೆ,ಮಾನವನಾಗು,ನಗಿಸುತ ನಗುತಲಿ ಬಾಳಲಿ ಸಾಗು,
ಎಂದ ನಾನು ದ್ರೋಹಿ ಏನು ...,     ಹಂ

ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,

ಸುಮ್ಮನೆ ಮಾತಲಿ ಕಾಲ ಕಳೆವೇಯೇಕೆ,
ನಿನ್ನ ಈ ಬಾಳನು ವ್ಯರ್ಥ ಗೂಳಿಸಲೇಕೆ
ತಿರದಾ ಆಸೆಯು ನಿನ್ನ ಮನದಲೇಕೆ,
ಜನಗಳ ತುಳಿಯುವ ನೀಚ ಬುದ್ದಿಯೇಕೆ,
ಎಲ್ಲರೂ ಕಲೆತು,ದ್ವೇಷವ ಮರೆತು ಸೋದರರಂತೆ ದುಡಿಯಿರಿ ಬಂದು,
ಎಂದ ನಾನು ವ್ಯೇರಿಯೇನು....ಹಂ

ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಸತ್ಯದ ಹಾದಿಯಲಿರುವಾಗ,ಧರ್ಮವೇ ರಕ್ಷಿಸುತಿರುವಾಗ,
ಈ ನಾಡಿಗೆ ನಾಡೆ ಹಿಂದಿರುವಾಗ,ಕನ್ನಡ ನನ್ನುಸಿರಾಗಿರುವಾಗ,
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,



ದೇವರ ಗುಡಿ :ಮಾಮರವೆಲ್ಲೋ..ಕೋಗಿಲೆಯೆಲ್ಲೋ...

ಚಿತ್ರ: ದೇವರ ಗುಡಿ
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ಬಿ.ರಾಮಮೂರ್ತಿ
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,

ಆಹಾ .......ಹಾ......ಹೇ.......ಹೇ.....ಆ....ಹಾ....ಆ.......
ಮಾಮರವೆಲ್ಲೋ..........ಕೋಗಿಲೆಯೆಲ್ಲೋ...........
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ

ಮಾಮರವೆಲ್ಲೋ...ಕೂಗಿಲೆಯಲ್ಲೋ......ಮಾಮರವೆಲ್ಲೋ...ಕೂಗಿಲೆಯಲ್ಲೋ......
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ


ಸೂರ್ಯನು ಎಲ್ಲೋ,ತಾವರೆ ಎಲ್ಲೋ ,
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ,ನೈದಿಲೆಯೇಲ್ಲೋ...
ನೋಡಲು ಅರಳುವ ಸಡಗರವೇನೂ,
ಎಲ್ಲೇ ಇರಲಿ,ಹೇಗೆ ಇರಲಿ,ಕಾಣುವ ಆಸೆ ಏತಕೋ ಏನೋ .

ಮಾಮರವೆಲ್ಲೋ...ಕೂಗಿಲೆಯಲ್ಲೋ......ಮಾಮರವೆಲ್ಲೋ...ಕೂಗಿಲೆಯಲ್ಲೋ......
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ

ಹುಣ್ಣೀಮೆಯಲ್ಲಿ,ತಣ್ಣನೆ ಗಾಳಿ
ಬೀಸಲು ನಿನ್ನಾ ನೆನಪಾಗುವುದು,
ದಿನಾ ರಾತ್ರಿಯಲಿ ಏಕಾಂತದಲಿ
ಏಕೋ ಏನೋ,ನೋವಾಗುವುದು ,
ಬಯಕೆಯ ತುಂಬಿ,ಆಸೆಯ ದುಂಬಿ,
ಎದೆಯನು ಕೊರೆದು ಕಾಡುವುದೇನು.

ಮಾಮರವೆಲ್ಲೋ...ಕೂಗಿಲೆಯಲ್ಲೋ......ಮಾಮರವೆಲ್ಲೋ...ಕೂಗಿಲೆಯಲ್ಲೋ......
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ
ಏನೀ ಸ್ನೇಹ ಸಂಬಂಧ,  ಏನೀ ಸ್ನೇಹ ಸಂಬಂಧ........