Friday, October 14, 2016

ಯಜಮಾನ :ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಚಿತ್ರ: ಯಜಮಾನ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಆರ್  ಶೇಷಾದ್ರಿ,ರಾಧಾ ಭಾರತಿ 
ಗಾಯಕರು: ರಾಜೇಶ್ 


ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ, ನೀ ಹೇಳೇ ತಾಂಗಾಳಿ 
ಮನಸಾರೆ ಮೆಚ್ಚಿ ಕೊಳುವೆ ,ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಬಾನಲಿ ಹುಣ್ಣಿಮೆಯಾದರೆ ನೀ, ಸವೆಯಬೇಡ ಸವೆಯುವೆ ನಾ ..... 
ಮೇಣದ ಬೆಳಕೇ ಆದರೆ ನೀ, ಕರಗಬೇಡ ಕರಾಗುವೆ ನಾ ..... 
ಹೂದೋಟವೇ ಆದ್ರೆ ನೀನು, ಹೂಗಳ ಬದಲು ಉದುರುವೆ ನಾ 
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಈ ಪ್ರತಿರೂಪವಾ ಬಿಡಿಸಲು ನಾ, ನೆತ್ತರಲೇ ಬಣ್ಣವನಿಡುವೆ 
ಈ ಪ್ರತಿಬಿಂಬವ ಕೆತ್ತಲು ನಾ, ಎದೆಯ ರೋಮದ ಉಳಿ ಇಡುವೆ 
ಕವಿತೆಯ ಹಾಗೆ ಬರೆದಿಡಲು, ಉಸಿರಾನೇ ಬಸಿದು ಪದವಿಡುವೆ 
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 
ಮನಸಾರೆ ಮೆಚ್ಚಿ ಕೊಳುವೆ,ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 


1 comment: