Tuesday, November 2, 2010

ಜನ-ಜೀವನ

ಈ ಪದವನ್ನು ಯಾರು  ಯಾಕೆ ಬಳಸಿದರೋ ತಿಳಿಯದು.ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ತರಹದ ಏರಿಳಿತಗಳು ಕಾಣಬರುತ್ತವೆ, ಉದಾ:ಕಷ್ಟ,ಸುಖ,ದುಃಖ,ನೋವು,ನಲಿವು,ಸಂತಸ ಮುಂತಾದವುಗಳು.
ಅದರಲ್ಲಿ ಕೆಲವರು ತಮ್ಮ ಸ್ವಾರ್ಥಕೊಸಕರ ಇನ್ನೊಬ್ಬರ ಜೀವನದಲ್ಲಿ ಇಲ್ಲದ,ಸಲ್ಲದ ಆರೋಪಗಳನ್ನೂ ಹೊರಿಸಿ,ಏನು ಗೊತ್ತಿಲ್ಲದಂತೆ ಹಿಂದೆ ನಿಂತು ಸಂತೋಷ  ಪಡುತ್ತಾರೆ.ಈ ತರಹದ ಸ್ವಾರ್ಥದಿಂದ ಅವರು ಏನನ್ನು ಸಾದಿಸುತ್ತರೋ ತಿಳಿಯದು.ಇಲ್ಲಿ ಒಂದು ಮಾತನ್ನು ಹೇಳಲು ಇಚ್ಚಿಸುತೇನೆ ಗೆಳೆಯರೇ ,ಆದೇನೆಂದರೆ ಈ ತರಹದ ಜನರು ಏನೇ ಮಾಡಿದರು ಅವರು ಮಾಡಿದ ಪಾಪ ಅವರ ಬೆನ್ನ ಹಿಂದೆಯೇ ಬರುವುದೆಂದು ದೊಡ್ಡವರು (ಹಿರಿಯರು)ಹೇಳಿದ್ದಾರೆಂದು ತಿಳಿಯದೆ ಹೋಗುತ್ತಾರೆ.
ಇನ್ನು ಕೆಲವರು ಜೊತೆಯಲ್ಲೇ ಇದ್ದು ಅವರ ಜೊತೆ ಚನ್ನಗಿರುವಂತೆ ನಟಿಸಿ , ಬೆನ್ನ ಹಿಂದೆ ಚೂರಿ ಹಾಕಿ (ಮೋಸ ಮಾಡಿ) ತನಗೇನು ತಿಳಿಯದಂತೆ ಸುಮ್ಮನಿದ್ದುಬಿಡುತ್ತಾರೆ.ಇಂಥವರನ್ನು ನಯವಂಚಕರು ಎಂದರೆ ತಪ್ಪಾಗಲಾರದು .
ಈ ರೀತಿ ಬೇರೆಯವರನ್ನು ಹಿಂಸಿಸಿ ತಾವು ಆನಂದ ಪಡುವ ಮಂದಿಗೆ ಮುಂದೆ ತಮಗೂ ಇಂತಹ ಪರಿಸ್ಥಿತಿ ಬರಬಹುದೆಂಬ ಅರಿವು ಅವರಿಗಿರುವುದಿಲ್ಲ ,ಇದರಿಂದ ಬೇರೆಯವರಿಗೆ ಎಷ್ಟು ನೋವಗಬಹುದೆಂದು ನೀವೇ ಊಹಿಸಿ .
ಇನ್ನು ಕೆಲವರು ಸಂತೋಷದಿಂದ ಜೀವನ ಸಾಗಿಸುವವರನ್ನು ನೋಡಿರುತೇವೆ . ಅವರು ಯಾರು ಏನೇ ಅಂದರು ಅದರ ಬಗ್ಗೆ ಕಿವಿಗೊಡದೆ (ತಲೆ ಕೆಡಿಸಿಕೊಳ್ಳದೆ )ತಮ್ಮದೇ ಆದ ನಿರ್ಧಿಷ್ಟ ಗುರಿಯತ್ತ ತಮ್ಮ ಗಮನವನ್ನು ಕೇಂದ್ರಿಕರಿಸಿ ,ಏನೇ ಆಡೆತಡೆಗಳಿದ್ದರೂಆದನ್ನು ಮೀರಿ ನಿಂತು ತಮ್ಮ ಗುರಿಯನ್ನು ತಲುಪಿ ,ಜೀವನದಲ್ಲಿ ಈ ರೀತಿಯು ಸಂತೋಷದಿಂದ ಇರಬಹುದೆಂದು ತೋರಿಸಿಕೊಟ್ಟ ಉದಾಹರಣೆಗಳಿವೆ .
ಆದ್ದರಿಂದ ಸ್ನೇಹಿತರೇ ಜೀವನದಲ್ಲಿ ಏನೇ ಕಷ್ಟ ಬಂದರು ಅದನ್ನು ಧ್ಯರ್ಯದಿಂದ ಎದುರಿಸಿ ತಮ್ಮ ಬಗ್ಗೆ ಕೊಂಕು ಮಾತುಗಳನ್ನಾಡುವ ಬಾಯಿಗೆ ಬೀಗ ಹಾಕಿ ,ಸರಿಯಾದ ಪಾಠ ಕಲಿಸಬೇಕು .ಹಾಗಾದರೆ ಮಾತ್ರ ಜನರು ತಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ಮುನ್ನೆಡೆಸಲು ಸಾದ್ಯವಾಗುವುದು.

No comments:

Post a Comment